Saturday, March 30, 2013

ಸುಭಾಷಿತ

ನೂರು ಉಪದೇಶಳಿಗಿಂತಲೂ ಆಪತ್ಕಾಲದಲ್ಲಿ   ಮಾಡಿದ  ಒಂದು ಸಹಾಯವು ಶ್ರೇಷ್ಠವಾದದ್ದು  : ಗೌತಮ ಬುದ್ಧ 
******************************************************************
ಯಾರದರೂ  ನಿಮ್ಮ ಮನಸನ್ನು ನೋಯಿಸಿದರೆ, 
ನೀವು ಕುಗ್ಗುವ ಬದಲು ಮತ್ತಷ್ಟು  ಗಟ್ಟಿಯಾಗಬೇಕು .
ಯಾರಾದರೂ ನಿಮ್ಮನ್ನು ಬಿಟ್ಟು ಹೋದಾಗ,
ನೀವು ಅಳುತ್ತಾ ಕೂರುವ ಬದಲು 
ನಾವು ಸ್ವತಂತ್ರವಾಗಿ ಬದುಕುವುದು ಹೇಗೆಂದು ಕಲಿಯಬೇಕು .... 

******************************************************
ಭೂತಕಾಲದಲ್ಲಿ ನಿಮಗೆ ನೋವುಂಟು  ಮಾಡಿದ ವಿಷಯಗಳನ್ನು ಮರೆತುಬಿಡಿ.
ಇದರಿಂದ ಮತ್ತೆ ಮತ್ತೆ ನೋವೇ ಹೆಚ್ಚು.
ಆದರೆ ನಿಮಗೆ ಜೀವನ  ಪಾಠ ಕಲಿಸಿದ ಅನುಭವಗಳನ್ನು  ಮಾತ್ರ ಮರೆಯಬೇಡಿ. 

********************************************************************
ಯಶಸ್ಸು ಪ್ರೇಯಸಿಯಂತೆ,ಅದು ನಮ್ಮನ್ನು ಯಾವಾಗ ಬೇಕಾದರೂ ಕೈ ಬಿಡಬಹುದು.
ಆದರೆ, ಸೋಲು ತಾಯಿಯಂತೆ ,ಅದು ಸದಾ ನಮಗೆ ಈ ಅಮೂಲ್ಯ ಜೀವನದ ಅಧ್ಯಾಯಗಳನ್ನು ಕಲಿಸುತ್ತದೆ.

********************************************************************
ನಿಮಗೆ ಮೋಸ ಮಾಡುತ್ತಿರುವ ಕಣ್ಣುಗಳನ್ನು ನೀವು ಅರ್ಥೈಸೀಕೊಳ್ಳದಿದ್ದರೆ ಅದು ನಿಮ್ಮ ತಪ್ಪಲ್ಲ.
ಆದರೆ, ನಿಮ್ಮನ್ನು ಪ್ರೀತಿಸುವ ಕಣ್ಣುಗಳನ್ನು ಅರಿಯದೇ ಹೋದರೆ ಅದು ಖಂಡಿತ ನಿಮ್ಮ ಪ್ರಮಾದ.

********************************************************************

ಪೂರ್ಣ ವಿರಾಮ ( . ) ನಿಜವಾದ ಅಂತ್ಯವಲ್ಲ.
ಮುಂದಿನ ವಾಖ್ಯದ ಆರಂಭಕ್ಕೆ ನಾಂದಿ.
ಜೀವನದ ವೈಫಲ್ಯಗಳು ಬದುಕಿನ ಅಂತ್ಯವಲ್ಲ.
ನಿಮ್ಮ ಯಶಸ್ಸಿನ ಆರಂಭಕ್ಕೆ ನಾಂದಿ.....